ಸತ್ಯೇಂದ್ರನಾಥ ಬೋಸ್
೧೯೨೫ ರಲ್ಲಿ, ಸತ್ಯೇಂದ್ರನಾಥ್ ಬೋಸ್ | |
ಜನನ | ೧ ಜನವರಿ ೧೮೯೪ ಕೊಲ್ಕತ್ತಾ, ಭಾರತ |
---|---|
ಮರಣ | 4 February 1974 (aged 80) ಕಲಕತ್ತಾ, ಭಾರತ |
ವಾಸಸ್ಥಳ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತಶಾಸ್ತ್ರ ಮತ್ತು ಗಣಿತ |
ಸಂಸ್ಥೆಗಳು | ಕಲ್ಕತ್ತಾ ವಿಶ್ವವಿದ್ಯಾಲಯ ಮತ್ತು ಢಾಕಾ ವಿಶ್ವವಿದ್ಯಾಲಯ |
ಅಭ್ಯಸಿಸಿದ ವಿದ್ಯಾಪೀಠ | ಕೊಲ್ಕತ್ತಾ ವಿಶ್ವವಿದ್ಯಾಲಯ |
ಪ್ರಸಿದ್ಧಿಗೆ ಕಾರಣ | ಬೋಸ್-ಐನ್ಸ್ಟೈನ್ ಕಂಡೆನ್ಸೇಟ್ ಬೋಸ್-ಐನ್ಸ್ಟೈನ್ ಅಂಕಿಅಂಶಗಳು ಬೋಸ್ ಅನಿಲ |
ಗಮನಾರ್ಹ ಪ್ರಶಸ್ತಿಗಳು | ಪದ್ಮ ವಿಭೂಷಣ ಫೆಲೊ ಆಫ್ ದ ರಾಯಲ್ ಸೊಸೈಟಿ |
ಸಂಗಾತಿ | ಉಶಾಬತಿ ಬೋಸ್, |
ಜನನ
ಸತ್ಯೇಂದ್ರನಾಥ್ ಬೋಸ್[೧] ಜನನ ಕಲ್ಕತ್ತಾದಲ್ಲಿ.ತಂದೆ ಸುರೇಂದ್ರನಾಥ್ ರೈಲ್ವೆ ಇಲಾಖೆಯ ಉದ್ಯೋಗಿ.ತಾಯಿ ಆಮೋದಿನೀ ದೇವಿ.ಚಿಕ್ಕಂದಿನಿಂದಲೂ ಗಣಿತಶಾಸ್ತ್ರದಲ್ಲಿ ಅಪಾರವಾದ ಆಸಕ್ತಿ.
ವಿದ್ಯಾಭ್ಯಾಸ,ಉದ್ಯೋಗ
ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ,೧೯೧೫ರಲ್ಲಿ ಎಂಎಸ್ಸಿ ಪದವಿ ಪಡೆದರು.೧೯೧೬ರಿಂದ ೧೯೨೧ರವರೆಗೂ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಕೆಲಸ ಮಾಡಿದರು.ಮುಂದೆ ಢಾಕಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು.೧೯೪೫ರಿಂದ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರಾಗಿ ೧೧ ವರ್ಷ ಕೆಲಸ ಮಾಡಿದರು.
ಸಂಶೋಧನೆ,ಸಾಧನೆ
ಬೋಸರು ಪ್ಲ್ಯಾಂಕನ ನಿಯಮ ಮತ್ತು ಲೈಟ್ ಕ್ವಾಂಟಮ್ ತತ್ವ ಕುರಿತು ಬರೆದ ಲೇಖನವನ್ನು ಪ್ರಸಿದ್ಧ ವಿಜ್ಞಾನಿ ಐನ್ಸ್ಟೀನರು ಮೆಚ್ಚಿಕೊಂಡು ಅದನ್ನು ಜರ್ಮನ್ ಭಾಷೆಗ ಅನುವಾದಿಸಿದರು.ಬೋಸರು ಪ್ಯಾರಿಸ್ಗೆ ಹೋದಾಗ ಮೇಡಮ್ ಕ್ಯೂರಿಯವರ ಪ್ರಯೋಗಶಾಲೆಯಲ್ಲಿ ಪ್ರಯೋಗಗಳನ್ನು ನಡೆಸಿದರು.ಬರ್ಲಿನ್ನಲ್ಲಿ ಐನ್ಸ್ಟೀನ್ರೊಡನೆ ಕೆಲಸ ಮಾಡಿದರು.
ಆಗ ಸಂಶೋಧನೆಗಳಿಗೆ ಭಾರತದಲ್ಲಿ ಹೆಚ್ಚು ಪ್ರೋತ್ಸಾಹವಿಲ್ಲದಿದ್ದರೂ ಐನ್ಸ್ಟೀನರ ಸಾಪೇಕ್ಷ ಸಿದ್ಧಾಂತದ ಸಹಾಯದಿಂದ ಅನಿಲಗಳ ಒತ್ತಡ, ಘನ ಅಳತೆ,ಉಷ್ಣತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿದರು. ರೇಖಾಗಣಿತದ ಕೆಲವು ಹೊಸ ಪ್ರಮೇಯಗಳನ್ನು ರೂಪಿಸಿದರು. ಸಂಖ್ಯಾಶಾಸ್ತ್ರದಲ್ಲಿ ಪ್ರತಿಭಾವಂತರಾಗಿದ್ದ ಅವರ ವಿವರಣೆಗಳಿಂದ ಕ್ವಾಂಟಮ್ ಸಂಖ್ಯಾಶಾಸ್ತ್ರ ಅರ್ಥಮಾಡಿಕೊಳ್ಳಲು ಸುಲಭವಾಯಿತು.[೨]
ಇತರ ಆಸಕ್ತಿ
ಬೋಸರ ಆಸಕ್ತಿ, ಭೌತಶಾಸ್ತ್ರಕ್ಕೆ ಮಾತ್ರ ಸೀಮಿತವಾಗಿರದೆ,ಭೂಗರ್ಭವಿಜ್ಞಾನ,ಪ್ರಾಣಿಶಾಸ್ತ್ರ,ರಸಾಯನಶಾಸ್ತ್ರಗಳಿಗೂ ವಿಸ್ತರಿಸಿತ್ತು.ಸಮಾಜ ಸೇವೆಯಲ್ಲೂ ಒಲವಿತ್ತು.ಸಂಗೀತ,ಸಾಹಿತ್ಯದಲ್ಲೂ ಆಸಕ್ತಿ.ತಂತುವಾದ್ಯವನ್ನು ನುಡಿಸುತ್ತಿದ್ದರು.ಬಂಗಾಳಿ,ಇಂಗ್ಲಿಷ್,ಫ್ರೆಂಚ್,ಜರ್ಮನ್ ಭಾಷೆಗಳನ್ನು ಕಲಿತಿದ್ದರು. ೧೯೫೦ರಲ್ಲಿ ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ಪ್ರಶಸ್ತಿ,ಸನ್ಮಾನ
- ೧೯೬೪ರಲ್ಲಿ ದೆಹಲಿ ವಿಶ್ವವಿದ್ಯಾನಿಲಯ ಡಿಎಸ್ಸಿ ಪ್ರಶಸ್ತಿ ನೀಡಿತು.
- ೧೯೭೪ ಜನವರಿಯಲ್ಲಿ ಕ್ವಾಂಟಮ್ ಸಂಖ್ಯಾಶಾಸ್ತ್ರದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಬೋಸರನ್ನು ಸನ್ಮಾನಿಸಲಾಯಿತು.